ಅಧ್ಯಾಯ 21: ಕೃಷ್ಣ Vs ಕಾಳಿಂಗ

  • 213
  • 66

ಕೃಷ್ಣನ ರಕ್ಷಣೆ (ಪೊಲೀಸ್ ಅಧಿಕಾರಿಯ ಮೇಲೆ ದಾಳಿ), ರಾತ್ರಿ 1:00 AMಕೃಷ್ಣನು ತನ್ನ ಪೋಲೀಸ್ ತಂಡದೊಂದಿಗೆ, ನಿವೃತ್ತ ಪೋಲೀಸ್ ಅಧಿಕಾರಿ ಗೋಪಾಲ್ ರೆಡ್ಡಿಯ (ಶಕ್ತಿ ಪ್ರಕರಣದ ಪ್ರಮುಖ ಸಾಕ್ಷಿ) ಹಳೆಯ ಮನೆಯನ್ನು ಸುತ್ತುವರಿದಿರುತ್ತಾನೆ. ಸೂತ್ರದಂತೆ ಹಂತಕನು ಗೋಪಾಲ್ ರೆಡ್ಡಿ ಮೇಲೆ ದಾಳಿ ಮಾಡುವುದು ಖಚಿತವಾಗಿರುತ್ತದೆ.ಗೋಡೆ ಹಾರಿ ಒಳ ನುಗ್ಗಿದ ಒಬ್ಬ ಮಫ್ತಿಯುಳ್ಳ, ವೃತ್ತಿಪರ ಹಂತಕನನ್ನು ಕೃಷ್ಣನು ಗುರುತಿಸುತ್ತಾನೆ. ಈ ಹಂತಕನು ಸುಸಜ್ಜಿತನಾಗಿರುತ್ತಾನೆ ಮತ್ತು ಅವನ ಚಲನವಲನಗಳು ಅತ್ಯಂತ ನಿಖರವಾಗಿರುತ್ತವೆ. ಇದು ಕೇವಲ ಕೂಲಿ ಕೊಲೆಗಾರನಲ್ಲ, ಬದಲಿಗೆ ಸಾವಿನ ಆರ್ಕಿಟೆಕ್ಟ್‌ನ ಅತಿ ನಿಕಟ ಸಹಾಯಕ ಎಂದು ಕೃಷ್ಣನಿಗೆ ಅರಿವಾಗುತ್ತದೆ.ಕೃಷ್ಣ: (ಕೋಪದಿಂದ, ಹಂತಕನಿಗೆ) ನಿಲ್ಲು ನೀನು ಪೋಲೀಸ್ ವಶದಲ್ಲಿದ್ದೀಯ.ಹಂತಕನು ಗನ್‌ನಿಂದ ಗುಂಡು ಹಾರಿಸುವ ಬದಲು, ಒಂದು ವಿಚಿತ್ರವಾದ ಸೈಲೆಂಟ್ ಶಾರ್ಪ್ ಟೂಲ್ನಿಂದ ಗೋಪಾಲ್ ರೆಡ್ಡಿ ಮನೆಯತ್ತ ಎಸೆಯುತ್ತಾನೆ. ಕೃಷ್ಣನು ತನ್ನ ವೇಗವನ್ನು ಬಳಸಿ ಆ ಟೂಲ್ ಅನ್ನು ತಡೆಯಲು ಪ್ರಯತ್ನಿಸುತ್ತಾನೆ. ಅದೇ ಸಮಯದಲ್ಲಿ ಕೃಷ್ಣ ಮತ್ತು ಹಂತಕನ ನಡುವೆ ರೋಮಾಂಚಕ ಕೈ-ಕೈ ಹೋರಾಟ ಶುರುವಾಗುತ್ತದೆ.