ನೇಪಾಳದ ಹಿಮದ ಹಾದಿಗಳನ್ನು ಸೀಳಿಕೊಂಡು ಆದರ್ಶ್ ತನ್ನ ಹಳೆಯ ಹೆಚ್.ಎಫ್ ಡಿಲಕ್ಸ್ ಬೈಕ್ನಲ್ಲಿ ರಶ್ಮಿಯನ್ನು ಕೂರಿಸಿಕೊಂಡು ಟಿಬೆಟ್ನ ವಿಶಾಲ ಪ್ರಸ್ಥಭೂಮಿಯನ್ನು ತಲುಪಿದಾಗ, ಮುಂಜಾನೆಯ ಸೂರ್ಯನ ಕಿರಣಗಳು ಆಕಾಶದಿಂದ ನೇರವಾಗಿ ಬೀಳುತ್ತಿರಲಿಲ್ಲ. ಅವು ಹಿಮದ ಶಿಖರಗಳಿಗೆ ಅಪ್ಪಳಿಸಿ ಪ್ರತಿಫಲಿಸುತ್ತಿದ್ದವು. ಸರೋವರದ ಹತ್ತಿರ ಹೋದಂತೆ ಮಾನಸಸರೋವರವು ಒಂದು ಬೃಹತ್ ನೀಲಿ ವಜ್ರದಂತೆ ಕಂಗೊಳಿಸುತ್ತಿತ್ತು. ಅದರ ನೀರು ಎಷ್ಟು ಸ್ತಬ್ಧ ಮತ್ತು ಶಾಂತವಾಗಿತ್ತೆಂದರೆ, ಅದು ಇಡೀ ಬ್ರಹ್ಮಾಂಡವನ್ನೇ ತನ್ನ ಒಡಲಲ್ಲಿ ಹಿಡಿದಿಟ್ಟಿರುವ ದೈವಿಕ ಕನ್ನಡಿಯನ್ನು ನೆಲದ ಮೇಲೆ ಹಾಸಿದಂತೆ ಭಾಸವಾಗುತ್ತಿತ್ತು. ಆದರ್ಶ್ನ ಸುವರ್ಣ ಲೇಖನಿಗೆ ಅಳವಡಿಸಲಾಗಿದ್ದ ಆ ಮುಕ್ತಿನಾಥದ ಶುದ್ಧೀಕರಣದ ಸಾಲಿಗ್ರಾಮವು ಈಗ ತೀವ್ರವಾಗಿ ಕಂಪಿಸತೊಡಗಿತು ಅದು ಈ ನೀಲಿ ನೀರಿನ ಅಡಿಯಲ್ಲಿ ಅಡಗಿರುವ ಅಶ್ವತ್ಥಾಮನ ಅತ್ಯಂತ ಕರಾಳ 'ಪ್ರತಿಬಿಂಬದ ಚಕ್ರವ್ಯೂಹವನ್ನು ಪತ್ತೆಹಚ್ಚಿ ಎಚ್ಚರಿಸುತ್ತಿತ್ತು.ಆದರ್ಶ್, ಈ ಸರೋವರದ ನೀರು ಎಷ್ಟು ಸ್ವಚ್ಛವಾಗಿದೆ ಎಂದರೆ ನನ್ನ ಪ್ರತಿಬಿಂಬ ನನಗೇ ವಿಚಿತ್ರವಾಗಿ ಮತ್ತು ಭಯಾನಕವಾಗಿ ಕಾಣುತ್ತಿದೆ. ಇಲ್ಲಿನ ಮೌನದಲ್ಲಿ ಯಾವುದೋ ಶಕ್ತಿ ನಮ್ಮನ್ನು ಗಮನಿಸುತ್ತಿರುವಂತೆ ಅನ್ನಿಸುತ್ತಿದೆ. ಅಶ್ವತ್ಥಾಮನು ಈ