ಅಧ್ಯಾಯ: ನಿರ್ಧಾರದ ಕ್ಷಣಸುಧಾಕರ್ ನೋಡಿ ಮೋಹನ್ ರಾವ್ ಹಾಗೆ ಅವರ ಫ್ಯಾಮಿಲಿ ಇನ್ನೇನು ಬರೋ ಸಮಯ ಇದನೆಲ್ಲ ಇಲ್ಲಿಗೆ ನಿಲ್ಲಿಸೋಣಅಂಬ್ರುತಾ ಹೃದಯದಲ್ಲಿ ಹೇಳಲಾಗದಷ್ಟು ಸಂಕಟ.“ಅಪ್ಪ... ಪ್ಲೀಸ್ ನೀವೇ ದೊಡ್ಡಪ್ಪನೀಗೆ ಹೇಳಿ ನಾನು ಸೂರ್ಯನ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದೀನಿ ದಯವಿಟ್ಟು ನಮ್ಮನ್ನಾ ದೂರ ಮಾಡ್ಬೇಡಿ.”ಸುಧಾಕರ್ ಅವಳ ನೋವನ್ನು ನೋಡಲಾರದೇ, ತಲೆ ತಗ್ಗಿಸುತ್ತಾನೆ.ಸೂರ್ಯನ ಕಣ್ಣೀರಿನ ಹನಿಯು ಅವನ ಕೆನ್ನೆಯನ್ನು ಇಳಿದು ಜಾರಿಹೋಗುತ್ತಿದ್ದಾಗ, ತನ್ನ ಅಸಹಾಯಕ ನೋಟದಿಂದ ತನ್ನ ಜೀವದ ಗೆಳೆಯನ ಮುಖವನ್ನೇ ನೋಡುತ್ತಾ ನಿಂತಿದ್ದ.ಜೆಕೆಯ ಸಹನೆಯ ಕಟ್ಟೆ ಒಡೆದು ಕೋಪದಲ್ಲಿ ನೋಟವನ್ನು ಬೀರುತ್ತಾನೆ.“ದೊಡ್ಡಪ್ಪ ಯಾಕೆ ನೀವು ಏನೂ ಮಾತಾಡ್ತೀಲ್ಲ..”ಆದರೆ ಜೆಕೆಯ ಮುಖವನ್ನು ಕೂಡಾ ನೋಡದೆ ಶಶಿಧರ್ ಅಲ್ಲಿಂದ ತನ್ನ ರೂಮ್ ಗೆ ಹೋಗುತ್ತಾನೆ. ಜೆಕೆ ಕೂಡ ಅವರ ಹಿಂದೇನೆ ಹೋಗುತ್ತಾನೆ.ಲಕ್ಕಿ ಗೊಂದಲದಲ್ಲಿ “ಅಯ್ಯೋ.. ಈ ಶಶಿ ಗೆ ಏನಾಗಿದೆ? ಸುಧಿ ಯಾಕೋ ಇವನು ಹೀಗೆ ಮಾಡ್ತೀದಾನೆ.. ಅಲ್ಲಾ ಈ ಮಕ್ಕಳ ಕಣ್ಣೀರು ಅವನಿಗೆ ಕಾಣಸ್ತಿಲ್ವಾ.. ಛೇ!”ಶೇಖರ್ ಗಂಭೀರವಾಗಿ, “ಅತ್ತೆ ಇದರಲ್ಲಿ ಶಶಿಧರ್