ಒತ್ತಡದಿಂದ ನಿರಾಳದೆಡೆಗೆ ನಿಮಗೆ ಒತ್ತಡ ಅನ್ನಿಸುತ್ತಿದೆಯಾ? ಕೆಲಸದ ಒತ್ತಡ, ಮನಸ್ಸು ನಿಲ್ಲದೇ ಓಡುವುದು, ರಾತ್ರಿ ನಿದ್ರೆ ಬರದೇ ಕಳವಳ, ಸಣ್ಣ ವಿಷಯಕ್ಕೂ ಆತಂಕ, ಒಳಗೊಂದು ಖಾಲಿತನ… ಇವೆಲ್ಲಾ ನಿಮಗೆ ಪರಿಚಿತವಾಗಿದ್ದರೆ, ಈ ಪುಸ್ತಕ ನಿಮ್ಮಿಗಾಗಿ. ಈ ಪುಸ್ತಕವು “ಒತ್ತಡವನ್ನು ಹೇಗೆ ಕಡಿಮೆ ಮಾಡಬೇಕು?” ಎಂದು ಕೇಳುವುದಿಲ್ಲ. ಅದಕ್ಕಿಂತ ಮಹತ್ವದ ಪ್ರಶ್ನೆಯನ್ನು ಕೇಳುತ್ತದೆ: ಒತ್ತಡವೇ ಯಾಕೆ ಉಂಟಾಗುತ್ತದೆ? ಒಂದೇ ಪರಿಸ್ಥಿತಿಯಲ್ಲಿ ಒಬ್ಬ ಶಾಂತವಾಗಿರುತ್ತಾನೆ, ಇನ್ನೊಬ್ಬ ತೀವ್ರ ಒತ್ತಡಕ್ಕೆ ಒಳಗಾಗುತ್ತಾನೆ. ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯಾಣವೇ ಒತ್ತಡದಿಂದ ನಿರಾಳದೆಡೆಗೆ. ಈ ಪುಸ್ತಕದಲ್ಲಿ ನೀವು ಓದುವ ಕಥೆಗಳು ಕಾಲ್ಪನಿಕವಲ್ಲ. ಅವು ನಿಜವಾದ ಅನುಭವಗಳ ಆಧಾರದ ಮೇಲೆ ಬರೆಯಲ್ಪಟ್ಟವು. ಹೆಸರುಗಳನ್ನು ಮಾತ್ರ ಬದಲಿಸಲಾಗಿದೆ. ಈ ಕಥೆಗಳಲ್ಲೇ ನೀವು ನಿಮ್ಮನ್ನೇ ಕಾಣಬಹುದು. ಇಲ್ಲಿ ಧ್ಯಾನವನ್ನು ಒಂದು ಕಠಿಣ ಅಭ್ಯಾಸವಾಗಿ ಅಥವಾ ಯಾವುದೋ ವಿಶೇಷ ಸಾಧನೆಯಂತೆ ಹೇಳಲಾಗುವುದಿಲ್ಲ. ಧ್ಯಾನವೆಂದರೆ ಇಲ್ಲಿ ನಿಮ್ಮೊಳಗೆ ಈಗಾಗಲೇ ಇರುವ ಅರಿವನ್ನು , ಆನಂದವನ್ನು ಗಮನಿಸುವುದು. ದೇಹದಲ್ಲಿ ಏನಾಗುತ್ತಿದೆಯೋ, ಮನಸ್ಸಿನಲ್ಲಿ ಏನೋ ನಡೆಯುತ್ತಿದೆಯೋ,
ಒತ್ತಡದಿಂದ ನಿರಾಳದೆಡೆಗೆ... - 1
ಒತ್ತಡದಿಂದ ನಿರಾಳದೆಡೆಗೆ ನಿಮಗೆ ಒತ್ತಡ ಅನ್ನಿಸುತ್ತಿದೆಯಾ? ಕೆಲಸದ ಒತ್ತಡ, ಮನಸ್ಸು ನಿಲ್ಲದೇ ಓಡುವುದು, ರಾತ್ರಿ ನಿದ್ರೆ ಬರದೇ ಕಳವಳ, ಸಣ್ಣ ವಿಷಯಕ್ಕೂ ಆತಂಕ, ಒಳಗೊಂದು ಖಾಲಿತನ… ನಿಮಗೆ ಪರಿಚಿತವಾಗಿದ್ದರೆ, ಈ ಪುಸ್ತಕ ನಿಮ್ಮಿಗಾಗಿ. ಈ ಪುಸ್ತಕವು “ಒತ್ತಡವನ್ನು ಹೇಗೆ ಕಡಿಮೆ ಮಾಡಬೇಕು?” ಎಂದು ಕೇಳುವುದಿಲ್ಲ. ಅದಕ್ಕಿಂತ ಮಹತ್ವದ ಪ್ರಶ್ನೆಯನ್ನು ಕೇಳುತ್ತದೆ: ಒತ್ತಡವೇ ಯಾಕೆ ಉಂಟಾಗುತ್ತದೆ? ಒಂದೇ ಪರಿಸ್ಥಿತಿಯಲ್ಲಿ ಒಬ್ಬ ಶಾಂತವಾಗಿರುತ್ತಾನೆ, ಇನ್ನೊಬ್ಬ ತೀವ್ರ ಒತ್ತಡಕ್ಕೆ ಒಳಗಾಗುತ್ತಾನೆ. ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯಾಣವೇ ಒತ್ತಡದಿಂದ ನಿರಾಳದೆಡೆಗೆ. ಈ ಪುಸ್ತಕದಲ್ಲಿ ನೀವು ಓದುವ ಕಥೆಗಳು ಕಾಲ್ಪನಿಕವಲ್ಲ. ಅವು ನಿಜವಾದ ಅನುಭವಗಳ ಆಧಾರದ ಮೇಲೆ ಬರೆಯಲ್ಪಟ್ಟವು. ಹೆಸರುಗಳನ್ನು ಮಾತ್ರ ಬದಲಿಸಲಾಗಿದೆ. ಈ ಕಥೆಗಳಲ್ಲೇ ನೀವು ನಿಮ್ಮನ್ನೇ ಕಾಣಬಹುದು. ಇಲ್ಲಿ ಧ್ಯಾನವನ್ನು ಒಂದು ಕಠಿಣ ಅಭ್ಯಾಸವಾಗಿ ಅಥವಾ ಯಾವುದೋ ವಿಶೇಷ ಸಾಧನೆಯಂತೆ ಹೇಳಲಾಗುವುದಿಲ್ಲ. ಧ್ಯಾನವೆಂದರೆ ಇಲ್ಲಿ ನಿಮ್ಮೊಳಗೆ ಈಗಾಗಲೇ ಇರುವ ಅರಿವನ್ನು , ಆನಂದವನ್ನು ಗಮನಿಸುವುದು. ದೇಹದಲ್ಲಿ ಏನಾಗುತ್ತಿದೆಯೋ, ಮನಸ್ಸಿನಲ್ಲಿ ಏನೋ ನಡೆಯುತ್ತಿದೆಯೋ, ...Read More
ಒತ್ತಡದಿಂದ ನಿರಾಳದೆಡೆಗೆ... - 2
ಭಾಗ-1: ಮನಸ್ಸಿನ ಕಥೆಗಳು - ಒತ್ತಡದ ನಿರ್ಮಾಣಒಂದೇ ಪರಿಸ್ಥಿತಿಯನ್ನು ಇಬ್ಬರು ಎರಡು ರೀತಿ ಅನುಭವಿಸುತ್ತಾರೆ. ಇದು ನಮಗೆಲ್ಲರಿಗೂ ತಿಳಿದ ವಿಷಯ, ಆದರೆ ಇದರ ಆಳವಾದ ಅರ್ಥವನ್ನು ಅಪರೂಪವಾಗಿ ಗಮನಿಸುತ್ತೇವೆ. ಒತ್ತಡಕ್ಕೆ ಕಾರಣ ಪರಿಸ್ಥಿತಿಯಲ್ಲ, ಮನಸ್ಥಿತಿಯಾಗಿದೆ. ನಮ್ಮ ಮನಸ್ಸು ರಚಿಸುವ ಕಥೆಗಳೇ ನಮ್ಮ ಒತ್ತಡವನ್ನು ನಿರ್ಧರಿಸುತ್ತವೆ.ಮನಸ್ಸಿನ ಕಥೆಗಳ ಶಕ್ತಿರಾಜು ಮತ್ತು ಕೃಷ್ಣ ಇಬ್ಬರೂ ಒಂದೇ ಕಛೇರಿಯಲ್ಲಿ ಕೆಲಸ ಮಾಡುತ್ತಾರೆ. ಇಬ್ಬರಿಗೂ ಒಂದೇ ದಿನ ಮೇಲಧಿಕಾರಿಯಿಂದ ಕರೆ ಬರುತ್ತದೆ: "ನಾಳೆ ಬೆಳಿಗ್ಗೆ ನನ್ನ ಕೊಠಡಿಗೆ ಬನ್ನಿ, ಮುಖ್ಯವಾದ ವಿಷಯ ಚರ್ಚಿಸಬೇಕು."ರಾಜುವಿನ ಮನಸ್ಸು ತಕ್ಷಣವೇ ಕಥೆಗಳನ್ನು ರಚಿಸಲು ಪ್ರಾರಂಭಿಸುತ್ತದೆ: "ಖಂಡಿತವಾಗಿ ನನ್ನನ್ನು ವಜಾ ಮಾಡಲಿದ್ದಾರೆ. ಕಳೆದ ವಾರ ನಾನು ಮಾಡಿದ ತಪ್ಪು ಅವರಿಗೆ ತಿಳಿದಿರಬೇಕು. ಕೆಲಸ ಹೋದರೆ ಮನೆಯ ಬಿಲ್ಲುಗಳನ್ನು ಹೇಗೆ ತೀರಿಸುವುದು? ಮಕ್ಕಳ ಶಿಕ್ಷಣ ಹೇಗಾಗುವುದು? ನನ್ನ ಪ್ರತಿಷ್ಠೆ ಹಾಳಾಗುತ್ತದೆ. ಊರಿನಲ್ಲಿ ಎಲ್ಲರೂ ನನ್ನನ್ನು ಏನು ಅನುತ್ತಾರೋ?" ಆ ರಾತ್ರಿ ಅವನಿಗೆ ನಿದ್ರೆ ಬರುವುದಿಲ್ಲ. ಹೊಟ್ಟೆಯಲ್ಲಿ ಗಂಟುಗಳು, ಎದೆಯಲ್ಲಿ ಭಾರ, ತಲೆಯಲ್ಲಿ ನೋವು.ಕೃಷ್ಣನ ...Read More