Pranam 2 - 2 in Kannada Spiritual Stories by Sandeep Joshi books and stories PDF | ಪ್ರಣಂ 2 - 2

Featured Books
  • ಪ್ರಣಂ 2 - 2

    ​ವಿಕ್ರಮ್‌‌ನಿಂದ ಹೊರಬಂದ ನಂತರ ಆರ್ಯನ್ ಮನಸ್ಸು ಇನ್ನಷ್ಟು ಗೊಂದಲಕ್ಕೆ...

  • ಮಾಯಾಂಗನೆ

    ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು.ಮಂಗಳೂರಿನಿಂದ ಮೈಸೂರಿಗೆ ಹೊರಡುವ...

  • ಬಯಸದೆ ಬಂದವಳು... - 18

    ಅಧ್ಯಾಯ 18 : "ವಿದಾಯದ ಕ್ಷಣಗಳು,ಮನೆಗೆ ಮರಳುವ ಹಾದಿ "ಮರುದಿನ ಅವರ ಎಕ್...

  • ಪ್ರಣಂ 2 - 1

    ಈ ಧಾರಾವಾಹಿಯಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕ ವಾಗ...

  • ಬೇಡಿದರೂ ನೀಡದವರು

    ಬೆಳಗ್ಗೆ ನಾಲ್ಕು ಗಂಟೆಗೆ ವಿರೂಪಾಕ್ಷಿ ಮಠದ ಗಂಟೆ ಬಾರಿಸಿದಾಗ, ಆ ಊರ ಸಮ...

Categories
Share

ಪ್ರಣಂ 2 - 2

​ವಿಕ್ರಮ್‌‌ನಿಂದ ಹೊರಬಂದ ನಂತರ ಆರ್ಯನ್ ಮನಸ್ಸು ಇನ್ನಷ್ಟು ಗೊಂದಲಕ್ಕೆ ಒಳಗಾಯಿತು. ವಿಕ್ರಮ್‌‌ನ ಮಾತುಗಳು ಅವನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದವು. ಕಥೆಗಳು ಪುನರಾವರ್ತನೆ ಆಗುತ್ತವೆ ಮತ್ತು ಹಳೆ ಸಂಬಂಧಗಳು ಹೊಸದಾಗಿ ಹುಟ್ಟುತ್ತವೆ ಎಂಬ ಮಾತುಗಳ ಹಿಂದಿನ ಅರ್ಥವೇನು? ವಿಕ್ರಮ್‌ಗೆ ತನ್ನ ಕನಸುಗಳ ಬಗ್ಗೆ ತಿಳಿದಿದೆಯೇ? ಅಥವಾ ಇದು ಕೇವಲ ಒಂದು ಕಾಕತಾಳೀಯವೇ? ಆರ್ಯನ್ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇನ್ನಷ್ಟು ಆಳವಾಗಿ ತನಿಖೆ ನಡೆಸಬೇಕೆಂದು ನಿರ್ಧರಿಸಿದನು. ಅದೇ ದಿನ ಆತ ಮತ್ತೆ ಅನುಳನ್ನು ಭೇಟಿಯಾಗಲು ನಿರ್ಧರಿಸುತ್ತಾನೆ. ಈ ಬಾರಿ ಅವಳೊಂದಿಗೆ ತನ್ನ ಕನಸುಗಳ ಬಗ್ಗೆ ನೇರವಾಗಿ ಮಾತನಾಡುವುದಿಲ್ಲ, ಆದರೆ ಅವಳ ಹಿಂದಿನ ಜೀವನದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಆರ್ಯನ್ ಅನುಳ ಬಳಿ ಹೋದಾಗ, ಅವಳು ಕೆಲವು ಹಳೆಯ ಶಿಲ್ಪಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಳು. ಆರ್ಯನ್ ಆ ಶಿಲ್ಪಗಳನ್ನು ನೋಡಿದಾಗ, ಅವುಗಳಲ್ಲಿ ಒಂದು ಸೇನಾಪತಿಯ ಮತ್ತು ಇನ್ನೊಂದು ರಾಣಿಯ ಶಿಲ್ಪಗಳು, ಅವು ಆರ್ಯನ ಕನಸಿನಲ್ಲಿ ಕಂಡ ವೀರಬಾಹು ಮತ್ತು ಪದ್ಮಾವತಿಯ ಶಿಲ್ಪಗಳಂತೆಯೇ ಇದ್ದವು.ಅನು ಈ ಶಿಲ್ಪಗಳ ಬಗ್ಗೆ ವಿವರಿಸುತ್ತಾ, ಇವು ಕ್ರಿ.ಪೂ. 13ನೇ ಶತಮಾನಕ್ಕೆ ಸೇರಿದವು. ಈ ರಾಣಿ ಪದ್ಮಾವತಿ ಮತ್ತು ಸೇನಾಪತಿ ವೀರಬಾಹುವಿನ ಕಥೆ ಬಹುತೇಕ ಜನರಿಗೆ ಗೊತ್ತಿಲ್ಲ. ಕೆಲವು ಇತಿಹಾಸಕಾರರ ಪ್ರಕಾರ, ವೀರಬಾಹುವನ್ನು ರಾಣಿಯ ರಕ್ಷಣೆ ಮಾಡುತ್ತಿದ್ದಾಗಲೇ ತನ್ನದೇ ಸೇನಾಪತಿ ಕಾಲಾನಾಗನಿಂದ ದ್ರೋಹಕ್ಕೆ ಒಳಗಾಗಿ ಕೊಲ್ಲಲ್ಪಟ್ಟನು. ನಂತರ, ರಾಣಿಯು ತನ್ನ ಮಾನ ಉಳಿಸಿಕೊಳ್ಳಲು ಅಗ್ನಿಗೆ ಬಿದ್ದು ಪ್ರಾಣ ಬಿಡುತ್ತಾಳೆ. ಈ ಕಥೆ ಬಹುತೇಕ ಇತಿಹಾಸದಲ್ಲಿ ನಶಿಸಿ ಹೋಗಿದೆ, ಏಕೆಂದರೆ ದ್ರೋಹ ಮಾಡಿದ ಕಾಲಾನಾಗನು ಇತಿಹಾಸವನ್ನು ತಿರುಚಿ ಬರೆದಿದ್ದನು. ಎಂದು ಹೇಳಿದಳು. ಅನು ನೀಡಿದ ಈ ಮಾಹಿತಿಯು ಆರ್ಯನಿಗೆ ದಿಗ್ಭ್ರಮೆಗೊಳಿಸಿತು. ತನ್ನ ಕನಸುಗಳು ಕೇವಲ ಕನಸುಗಳಾಗಿರದೆ, ಅವು ನಿಜವಾದ ಇತಿಹಾಸದ ಒಂದು ಭಾಗವೆಂದು ಅವನಿಗೆ ಖಚಿತವಾಯಿತು. ಆದರೆ, ಈ ಇತಿಹಾಸದ ಬಗ್ಗೆ ಅನುಗೆ ಹೇಗೆ ಗೊತ್ತು ಎಂಬುದು ಅವನಿಗೆ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದಿತ್ತು.

​ಅನು, ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು? ಎಂದು ಆರ್ಯನು ಕುತೂಹಲದಿಂದ ಕೇಳಿದನು.ನನಗೆ ಸಣ್ಣ ವಯಸ್ಸಿನಿಂದಲೇ ಈ ಕಥೆಗಳ ಬಗ್ಗೆ ಒಂದು ರೀತಿಯ ಆಕರ್ಷಣೆ ಇದೆ. ಈ ಇತಿಹಾಸವನ್ನು ನಾನು ನನ್ನ ವೈಯಕ್ತಿಕ ಜೀವನದ ಭಾಗವೆಂದೇ ಭಾವಿಸುತ್ತೇನೆ, ಎಂದು ಅನು ನಿಧಾನವಾಗಿ ಹೇಳಿದಳು.​ಅವಳ ಈ ಮಾತು ಆರ್ಯನ ಮನಸ್ಸಿನಲ್ಲಿ ಅನುಳ ಬಗ್ಗೆ ಇರುವ ಭಾವನೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿತು. ಆರ್ಯನು ತನ್ನ ಮನಸ್ಸಿನ ರಹಸ್ಯವನ್ನು ಅನುಗೆ ಹೇಳಲು ಮನಸ್ಸು ಮಾಡುತ್ತಾನೆ. ನನ್ನ ಹೆಸರೂ ಆರ್ಯನ್, ಆದರೆ ನನ್ನ ಕನಸುಗಳಲ್ಲಿ ನನ್ನ ಹೆಸರು ವೀರಬಾಹು. ನಾನೇ ಹಿಂದಿನ ಜನ್ಮದಲ್ಲಿ ರಾಣಿ ಪದ್ಮಾವತಿಯನ್ನು ರಕ್ಷಿಸಲು ಪ್ರಯತ್ನಿಸಿ ಸೋತ ವೀರಬಾಹು. ನೀವು ಆ ರಾಣಿಯ ಪ್ರತಿರೂಪ, ಎಂದು ಹೇಳಿದನು.​ಅನು ಒಂದು ಕ್ಷಣ ಆರ್ಯನನ್ನು ದಿಟ್ಟಿಸಿ ನೋಡುತ್ತಾಳೆ. ಇದುವರೆಗೆ ಆರ್ಯನ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಗೌರವ, ಈ ಮಾತುಗಳ ನಂತರ ಇನ್ನಷ್ಟು ಹೆಚ್ಚಾಯಿತು. ಆದರೆ, ಅದೇ ಸಮಯದಲ್ಲಿ, ಅವಳು ಆರ್ಯನ ಮಾತುಗಳನ್ನು ನಂಬಬೇಕೋ ಬೇಡವೋ ಎಂದು ಗೊಂದಲಕ್ಕೆ ಒಳಗಾದಳು. ಅಂತಿಮವಾಗಿ, ಅವಳು ಅವನ ಮಾತುಗಳನ್ನು ನಂಬಲು ನಿರ್ಧರಿಸುತ್ತಾಳೆ, ಏಕೆಂದರೆ ಅವಳಿಗೂ ಆರ್ಯನ ಮೇಲೆ ಒಂದು ರೀತಿಯ ಭಾವನಾತ್ಮಕ ಸಂಪರ್ಕವಿತ್ತು.ಹಾಗಾದರೆ, ನಾವು ಹಿಂದಿನ ಜನ್ಮದ ಪಾತ್ರಗಳನ್ನು ಈ ಜನ್ಮದಲ್ಲಿ ಪುನಃ ಭೇಟಿಯಾಗುತ್ತಿದ್ದೇವೆಯೇ? ಎಂದು ಅನು ಆಶ್ಚರ್ಯದಿಂದ ಕೇಳಿದಳು.ಆರ್ಯನ್ ಗೆ ಅನುಳ ಪ್ರತಿಕ್ರಿಯೆ ಆಶ್ಚರ್ಯ ತಂದಿತು. ಬಹುಶಃ ಹೌದು. ಆದರೆ, ಈ ಕಥೆಯಲ್ಲಿ ಒಂದು ಖಳನಾಯಕನೂ ಇದ್ದಾನೆ. ನನ್ನ ಕನಸುಗಳಲ್ಲಿ ಅವನು ಕಾಲಾನಾಗ್. ಈ ಜನ್ಮದಲ್ಲಿ ಅವನು ನಮ್ಮ ಎದುರಾಳಿ ವಿಕ್ರಮ್‌ ಎಂದು ನನಗೆ ಅನ್ನಿಸುತ್ತಿದೆ, ಎಂದು ಆರ್ಯ ಹೇಳಿದನು. ​ಇಬ್ಬರೂ ಸೇರಿಕೊಂಡು, ತಮ್ಮ ಕನಸುಗಳ ಮತ್ತು ವಿಕ್ರಮ್‌‌ನ ನಡುವಿನ ಸಂಬಂಧವನ್ನು ತನಿಖೆ ಮಾಡಲು ನಿರ್ಧರಿಸುತ್ತಾರೆ. ಈ ಸಮಯದಲ್ಲಿ, ವಿಕ್ರಮ್‌‌ನಿಗೆ ಆರ್ಯ ಮತ್ತು ಅನು ಇಬ್ಬರೂ ಒಂದಾಗಿ ತಮ್ಮ ವಿರುದ್ಧ ಕೆಲಸ ಮಾಡುತ್ತಿರುವುದು ತಿಳಿದು ಬರುತ್ತದೆ. ವಿಕ್ರಮ್‌ ತನ್ನ ಯೋಜನೆಯನ್ನು ಇನ್ನಷ್ಟು ತೀವ್ರಗೊಳಿಸಿ, ಆರ್ಯನ ನ್ನು ಇನ್ನಿಲ್ಲವಾಗಿಸಲು ನಿರ್ಧರಿಸುತ್ತಾನೆ. ಇದೇ ಸಮಯದಲ್ಲಿ, ವಿಕ್ರಮ್‌ ತಾನೊಬ್ಬ 'ಸಾಮಾನ್ಯ' ಮನುಷ್ಯನಲ್ಲ, ತನ್ನಲ್ಲಿ ಬೇರೆ ಒಂದು ಶಕ್ತಿಯಿದೆ ಎಂದು ಮನಗಾಣಿಸುತ್ತಾನೆ. ಆದರೆ, ಅದು ಏನಿದು ಎಂಬುದು ಇನ್ನೂ ತಿಳಿದಿಲ್ಲ.​ಆರ್ಯನ್ ಮತ್ತು ಅನು ತಮ್ಮ ನಡುವಿನ ಸಂಪರ್ಕ ಮತ್ತು ವಿಕ್ರಮ್‌‌ನ ದುರುದ್ದೇಶದ ಬಗ್ಗೆ ಮತ್ತಷ್ಟು ಆಳವಾಗಿ ಯೋಚಿಸಿದರು. ಈ ಕಥೆಯ ಹಿಂದಿನ ರಹಸ್ಯವನ್ನು ಬಯಲು ಮಾಡಲು ಅವರಿಗೆ ಹೆಚ್ಚಿನ ಮಾಹಿತಿ ಬೇಕಿತ್ತು. ಅನುಳಿಗೆ ದೇವಾಲಯಗಳ ಇತಿಹಾಸ ಮತ್ತು ಹಳೆಯ ದಾಖಲೆಗಳ ಬಗ್ಗೆ ಅಪಾರ ಜ್ಞಾನವಿದ್ದರೂ, ಇಂತಹ ವೈಯಕ್ತಿಕ ಗತಕಾಲದ ನೆನಪುಗಳನ್ನು ಅರಿಯುವ ಶಕ್ತಿ ಅವಳಿಗಿರಲಿಲ್ಲ. ಆರ್ಯನಿಗೆ ಆಗ ತನ್ನ ಗೆಳೆಯ ರಾಜೇಶ್ ನೀಡಿದ ಮತ್ತೊಂದು ಮಾಹಿತಿ ನೆನಪಾಯಿತು. ಇತಿಹಾಸದ ಕೆಲವು ರಹಸ್ಯಗಳು ಕೇವಲ ಪುಸ್ತಕಗಳಲ್ಲಿ ಸಿಗುವುದಿಲ್ಲ, ಅವು ಇತಿಹಾಸವನ್ನು ಬಲ್ಲ ಜನರಲ್ಲಿ ಮತ್ತು ಸನ್ಯಾಸಿಗಳಲ್ಲಿ ಸಿಗಬಹುದು, ಎಂದು ರಾಜೇಶ್ ಹೇಳಿದ್ದನು.ಅದೇ ಸಮಯದಲ್ಲಿ, ಆರ್ಯನ್ ಮತ್ತು ಅನು ಇಬ್ಬರೂ ತಮ್ಮ 'ಪ್ರಣಂ 2' ಪ್ರಾಜೆಕ್ಟ್‌ನಲ್ಲಿ ಮುಂದುವರಿಯುತ್ತಿದ್ದರು. ವಿಕ್ರಮ್‌‌ನಿಂದ ಒಂದು ಅನಿರೀಕ್ಷಿತ ಕರೆ ಬಂತು. ಆರ್ಯ, ನಿಮ್ಮ ಪ್ರಾಜೆಕ್ಟ್‌ನಲ್ಲಿ  ನಾವು ಸೇರಿಕೊಳ್ಳಲು  ಸಿದ್ಧರಿದ್ದೇವೆ. ಇದರ ಜೊತೆಗೆ, ನಮ್ಮ ಹಳೆಯ ದ್ವೇಷಗಳನ್ನು ಮರೆತು ಹೊಸ ಸಂಬಂಧಕ್ಕೆ ಬರುವುದನ್ನು ಸಹ ನಿರೀಕ್ಷಿಸುತ್ತೇನೆ, ಎಂದು ನಯವಾಗಿ ಹೇಳುತ್ತಾನೆ. ಆರ್ಯನ್ ಗೆ ವಿಕ್ರಮ್‌‌ನ ಈ ಮಾತುಗಳು ಇಷ್ಟವಾಗಲಿಲ್ಲ, ಏಕೆಂದರೆ ಅದರ ಹಿಂದೆ ಅವನ ಮೋಸದ ಉದ್ದೇಶ ಅವನಿಗರ್ಥವಾಯಿತು. ಆರ್ಯನು ವಿಕ್ರಮ್‌‌ನ ಪ್ರಸ್ತಾಪವನ್ನು ತಿರಸ್ಕರಿಸಿದನು. ಆಗ ವಿಕ್ರಮ್‌ ನಕ್ಕು, ನೀವು ಇನ್ನೂ ನಿಮ್ಮ ಹಳೆಯ ಜನ್ಮದ ಹಠವನ್ನು ಬಿಟ್ಟಿಲ್ಲ. ಮುಂದಿನ ಅಧ್ಯಾಯಗಳು ಬೇರೆ ರೀತಿಯಲ್ಲಿ ಬರೆಯಲ್ಪಡುತ್ತವೆ" ಎಂದು ಬೆದರಿಕೆ ಹಾಕಿದನು.

​ಅದೇ ದಿನ ಸಂಜೆ, ಆರ್ಯನ್ ತನ್ನ ಮನಸ್ಸಿಗೆ ಶಾಂತಿ ಸಿಗಲೆಂದು ದೇವಸ್ಥಾನವೊಂದಕ್ಕೆ ಹೋಗಲು ನಿರ್ಧರಿಸುತ್ತಾನೆ. ಆ ದೇವಾಲಯವು ಅತಿ ಹಳೆಯದಾಗಿತ್ತು ಮತ್ತು ಆರ್ಯನ ಪ್ರಾಜೆಕ್ಟ್‌ನಲ್ಲೂ ಅದು ಸೇರಿತ್ತು. ದೇವಸ್ಥಾನದೊಳಗೆ ಪ್ರವೇಶಿಸಿದಾಗ, ಆರ್ಯನಿಗೆ ಏನೋ ವಿಶೇಷವಾದ ಅನುಭವವಾಯಿತು. ಅವನಿಗೆ ಅಲ್ಲಿದ್ದ ಹಳೆಯ ಕಂಬಗಳ ಮೇಲೆ ವಿಚಿತ್ರವಾದ ಸಂಕೇತಗಳು ಮತ್ತು ಚಿತ್ರಗಳು ಕಂಡವು. ಆ ಚಿತ್ರಗಳಲ್ಲಿ ವೀರಬಾಹು ಮತ್ತು ಪದ್ಮಾವತಿಯ ಕಥೆ ಮತ್ತೆ ಕಂಡಿತು. ಆದರೆ ಈ ಚಿತ್ರಗಳಲ್ಲಿದ್ದ ಕಥೆಯ ಕೊನೆಯ ಭಾಗ ಆರ್ಯನ ಕನಸಿನಲ್ಲಿ ಬಂದದ್ದಕ್ಕಿಂತ ಭಿನ್ನವಾಗಿತ್ತು. ​ಕಥೆಯ ಪ್ರಕಾರ, ವೀರಬಾಹು ಮತ್ತು ಪದ್ಮಾವತಿಯನ್ನು ಕೊಂದ ನಂತರ, ಅವರ ಆತ್ಮಗಳು ಬೇರೆ ಬೇರೆ ರೀತಿ ವಿಭಜನೆಗೊಂಡವು. ಪದ್ಮಾವತಿಯ ಆತ್ಮ ತಕ್ಷಣವೇ ಮರುಜನ್ಮ ಪಡೆದರೆ, ವೀರಬಾಹುವಿನ ಆತ್ಮ ಒಂದು ರೀತಿಯ ನಿಗೂಢ ಶಕ್ತಿಯಾಗಿ ವಿಭಜನೆಗೊಂಡಿತ್ತು. ದ್ರೋಹದ ನೋವಿನಿಂದ ಆ ಆತ್ಮದ ಒಂದು ಭಾಗ ಈ ಜನ್ಮದ ಆರ್ಯನಾಗಿ ಮರುಹುಟ್ಟು ಪಡೆದರೆ, ಇನ್ನೊಂದು ಭಾಗ ಜೀವನ್ ಎಂಬ ಮತ್ತೊಂದು ಶಕ್ತಿಯಾಗಿ ಜೀವಂತವಾಗಿ ಉಳಿದಿತ್ತು, ಆದರೆ ಅವನು ಈ ಪ್ರಪಂಚದಿಂದ ಬೇರೆಡೆಗೆ ದೂರವಿದ್ದನು. ​ಈ ರಹಸ್ಯ ಆರ್ಯನಿಗೆ ಆಶ್ಚರ್ಯವನ್ನು ಉಂಟು ಮಾಡಿತು. ನನ್ನದೇ ಇನ್ನೊಂದು ಪಾತ್ರವಿದೆಯೇ? ಅದು ಯಾರು? ಮತ್ತು ಆತ ಈಗ ಎಲ್ಲಿದ್ದಾನೆ? ಎಂದು ಅವನು ಆಲೋಚಿಸುತ್ತಾನೆ. ಆರ್ಯನ್ ಗೆ, ಈ ರಹಸ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗುರುಜಿ ಅವರನ್ನು ಭೇಟಿಯಾಗಬೇಕೆಂದು ಅನ್ನಿಸುತ್ತದೆ. ಆರ್ಯನ ಸ್ನೇಹಿತ ರಾಜೇಶನು ಹಿಂದೆ ಆ ದೇವಾಲಯದ ಬಗ್ಗೆ ಮಾತನಾಡಿದಾಗ, ಅಲ್ಲೊಂದು ಮರದಲ್ಲಿ ವಾಸಿಸುವ ಒಬ್ಬ ಸನ್ಯಾಸಿಯ ಬಗ್ಗೆ ಹೇಳಿದ್ದನು. ಅವರು ಇತಿಹಾಸದ ರಹಸ್ಯಗಳನ್ನು ರಹಸ್ಯವಾಗಿಯೇ ಇಟ್ಟಿದ್ದಾರೆ, ಎಂದು ಹೇಳಿದ್ದನು.ಆರ್ಯನ್ ಮತ್ತು ಅನು ಮರುದಿನ ಆ ಸನ್ಯಾಸಿಯನ್ನು ಹುಡುಕಲು ಹೋದರು. ಅಲ್ಲಿ, ಅವರಿಗೆ ಗುರುಜಿ ಎಂಬ ಹೆಸರಿನ ಒಬ್ಬ ಸನ್ಯಾಸಿ ಭೇಟಿಯಾದರು. ಅವರು ಆರ್ಯ ಮತ್ತು ಅನು ಬಗ್ಗೆ, ಹಾಗೂ ಅವರ ಹಿಂದಿನ ಜನ್ಮದ ಬಗ್ಗೆ ಮೊದಲೇ ತಿಳಿದಿರುವಂತೆ ಮಾತನಾಡಿದರು. ಗುರುಜಿ, ಆರ್ಯನ್ ಗೆ ನೀವು ನಿಮ್ಮ ಹಿಂದಿನ ಜನ್ಮದ ಕಥೆಯನ್ನು ತಿಳಿದಿದ್ದೀರಿ, ಆದರೆ ನಿಮ್ಮ ಕಥೆ ಕೇವಲ ಒಂದು ಭಾಗ ಮಾತ್ರ. ನಿಮ್ಮ ಆತ್ಮದ ಇನ್ನೊಂದು ಭಾಗ ಇನ್ನೂ ಜೀವಂತವಾಗಿದೆ, ಅದಕ್ಕೆ ಜೀವನ್ ಎಂದು ಹೆಸರು, ಎಂದು ಹೇಳುತ್ತಾರೆ.​ಆರ್ಯನು ದಿಗ್ಭ್ರಮೆಗೊಂಡನು. ಹಾಗಾದರೆ, ನಾವು ವಿಕ್ರಮ್‌‌ನನ್ನು ಸೋಲಿಸಲು ಇಬ್ಬರೂ ಒಂದಾಗಬೇಕೇ? ಎಂದು ಆರ್ಯನು ಗುರುಜಿಯನ್ನು ಕೇಳಿದನು.ಹೌದು, ಆದರೆ ವಿಕ್ರಮ್‌ ನನ್ನು ನೀವು ಕೇವಲ ಶಕ್ತಿಯಿಂದ ಸೋಲಿಸಲು ಸಾಧ್ಯವಿಲ್ಲ. ನೀವು ನಿಮ್ಮ ಹಿಂದಿನ ದ್ರೋಹಿಯ ವಿರುದ್ಧ ವಿಜಯ ಗಳಿಸಬೇಕಾದರೆ, ನಿಮ್ಮ ದ್ವೇಷವನ್ನು ಕ್ಷಮೆಯಾಗಿ ಬದಲಾಯಿಸಬೇಕು. ಆಗ ಮಾತ್ರ ವಿಕ್ರಮ್‌ ನನ್ನು ನೀವು ಸಂಪೂರ್ಣವಾಗಿ ಸೋಲಿಸಲು ಸಾಧ್ಯ, ಎಂದು ಗುರುಜಿ ಹೇಳುತ್ತಾರೆ.​ಇದೇ ಸಮಯದಲ್ಲಿ, ವಿಕ್ರಮ್‌ ಅನುಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಅವಳ ಮೇಲೆ ದಾಳಿ ಮಾಡಲು ಯೋಜನೆ ಮಾಡುತ್ತಾನೆ. ಅವನು ತಾನೊಬ್ಬ ಮಹಾನ್ ವಂಚಕ, ಮತ್ತು ಇತಿಹಾಸವನ್ನು ಬದಲಾಯಿಸುವ ಸಾಮರ್ಥ್ಯ ನನಗಿದೆ, ಎಂದು ಅಂದುಕೊಳ್ಳುತ್ತಾನೆ. ಆದರೆ, ಅವನಿಗೆ ಒಂದು ವಿಷಯ ತಿಳಿದಿರಲಿಲ್ಲ. ತನ್ನ ವಿರೋಧಿ, ಆರ್ಯನು ಈಗ ಕೇವಲ ಒಬ್ಬ ಉದ್ಯಮಿ ಅಲ್ಲ, ಅವನ ಜೊತೆ ಇತಿಹಾಸದ ಬಗ್ಗೆ ತಿಳಿದಿರುವ ಅನು ಮತ್ತು ಆಧ್ಯಾತ್ಮಿಕ ಶಕ್ತಿಯ ಬಗ್ಗೆ ತಿಳಿದಿರುವ ಗುರುಜಿ ಇದ್ದರು.

                              ಮುಂದುವರೆಯುತ್ತದೆ.